ಹೋಂ ಕ್ವಾರಂ ಟೈನ್ ಗೆ ಒಳಗಾಗಿ ಮನೆಯಿಂದ ಹೊರಬರಲು ಅಸಾಧ್ಯವಾಗಿರುವ ಫರಂಗಿಪೇಟೆ ಆಸುಪಾಸಿನ ತೇವುಕಾಡು ಬೆಂಜನಪದವು, ಕುಮುಡೇಲು, ಸುಜೀರು ಹಾಗೂ ಮಾರಿಪಳ್ಳದ ಹತ್ತು ಮನೆಗಳಿಗೆ ಜೀವನಾವಶ್ಯಕ ಪಡಿತರ ವಸ್ತುಗಳನ್ನು ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನೀಡಲಾಯಿತು
ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿಗಳಾದ ಅರ್ಜುನ್ ಪೂಂಜಾ,ಭಾಸ್ಕರ ಚೌಟ ಕುಮುದೇಲು ಕಾರ್ಯಕರ್ತರಾದ ಮಂಟಮೆ ಪದ್ಮನಾಭ ಕರ್ಕೇರಾ, ಕಿಶೋರ್ ಮಾರಿಪಳ್ಳ ಮೋಹನ್ ಬೆಂಜನ ಪದವು, ಗಣೇಶ್ ಸಪಲ್ಯ ಸುಜೀರು, ಸುಕೇಶ್ ಶೆಟ್ಟಿ ತೇವು, ಲೋಕೇಶ್ ಬಿ. ಕಲ್ಲತಡಮೆ, ದೀಕ್ಷಿತ್ ಬಂಗೇರ ಬಂಗ್ಲೆ, ವಿಕ್ರಮ್ ಬರ್ಕೆ ಸಹಕರಿಸಿದರು.