ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಅದಷ್ಟು ಯುವಕರು ಫೇಸ್ಬುಕ್ ,ವ್ಯಾಟ್ಸ್ ಅಪ್ ನಲ್ಲಿ ಎಲ್ಲಿಂದಲೋ ಬಂದ ಫೇಕ್ ನ್ಯೂಸ್ ಬಗ್ಗೆ ತಲೆ ಕೆಡಿಸಿ ,ಪೋರ್ವಡ್ ಮಾಡಿ, ಪುಕ್ಕಟೆ ಸಲಹೆ ಸೂಚನೆ ನೀಡುದರ ಮುಖಾಂತರ ನಾವೇನೂ ಸಮಾಜಕ್ಕೆ ದೊಡ್ಡ ಕೊಡುವ ತರ ಫೋಸ್ ನೀಡುವ ಯುವಕರಿಗೆ ಇಲ್ಲೊಬ್ಬ ಯುವಕ ತನ್ನಲ್ಲಿ ಇರುವ ಸಮಾನ್ಯ ಜ್ಞಾನ ಬಳಸಿ ಇತರ ಯುವಕರಿಗೆ ಮಾದರಿಯಾದ ಸುದ್ದಿ ಬೆಳಕಿಗೆ ಬಂದಿದೆ.
ಪೊಲೀಸರು ಜನರು ರಸ್ತೆಗಿಳಿಯದಂತೆ ಕಠಿಣ ಕಾನೂನು ಕ್ರಮ ಸರಕಾರದ ನಿಯಮಾವಳಿಗೆ ಬದ್ದರಾಗಿ ರಾತ್ರಿ ಹಗಲು ಎನ್ನದೆ ಜೀವ ಕೈಯಲ್ಲಿ ಹಿಡಿದು ಎ.ಸಿ ರೂಮಿನಲ್ಲಿ ಅದೇಶ ಪ್ರಕಟಿಸುವ ಹಿರಿಯ ಅಧಿಕಾರಿಗಳ ಅದೇಶ ಪಾಲಿಸುವ ಪೋಲಿಸ್ ಪೇದೆಗಳ ಇದ್ದಾರೆ. ಅವರ ದುಖಃ ದುಮ್ಮಾನಗಳ ಬಗ್ಗೆ ಯಾರೂ ಸಮಾಜ , ಇಲಾಖೆ , ಇದರ ಬಗ್ಗೆ ಯಾರೂ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ಅದರೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿ ಪರಂಗಿಪೇಟೆಯ ಅರ್ಜುನ್ ಪೂಂಜ ಎಂಬ ಯುವಕ ಲಾಕ್ ಡೌನ್ ಬಿಡುವಿನ ಅವಧಿಯನ್ನು ಸಮರ್ಪಕವಾಗಿ ವಿನಿಯೋಗಿಸಿ ತಾನೇ ಅವಸ್ಕರಿಸಿದ Foot Operated Wash Basin ಪೋಲಿಸ್ ಇಲಾಖೆಗೆ ಉಚಿತವಾಗಿ ಸಮರ್ಪಿಸಿ ಹಿರಿಯರಿಂದ ಶಾಹಬ್ಬಾಸ್ ಗಿರಿ ಗಿಟ್ಟಿಸಿ ಕೊಂಡಿದ್ದಾನೆ.
ಉಪಯೋಗಕ್ಕೆ ಬಾರದ PVC ಪೈಪ್ ಗಳ ತುಂಡುಗಳನ್ನು ಬಳಸಿ ಕೈಯಿಂದ ಅಥವಾ ನಮ್ಮ ಶರೀರಕ್ಕೆ ನೇರ ವೈರಸ್ ಸಂಪರ್ಕಕ್ಕೆ ಸಿಗದ ರೀತಿ ಕಾಲಿನಿಂದ ಉಪಯೋಗ ಮಾಡುವಂತ ಪೆಡಲ್ ವ್ಯವಸ್ಥೆ ಮಾಡಿ ಕಡಿಮೆ ವೆಚ್ಚದಲ್ಲಿ ಸುಂದರವಾದ ಸ್ಟ್ಯಾಂಡ್ ಗಳನ್ನು ನಿರ್ಮಿಸಿ ಹೀಗೂ ಪ್ರತಿಭೆಯನ್ನು ಬಳಸಿ ಸಮಾಜಸೇವೆ ಮಾಡಬಹುದು ಎಂದು ಇತರರಿಗೆ ತೋರಿಸಿ ಕೊಟ್ಟಿದ್ದಾನೆ.
ಈಗಾಗಲೇ ನಿರ್ಮಿಸಿರುವ Foot Operated Wash Basinಮಂಗಳೂರಿನ ಠಾಣೆಗೆ ಕೊಡುಗೆ ರೂಪದಲ್ಲಿ ನೀಡುವುದು ಎಂದು ತೀರ್ಮಾನಿಸಿರುತ್ತಾನೆ. ಇದು ಪೋಲಿಸ್ ,ಮತ್ತು ಸಾರ್ವಜನಿಕ ವಲಯದಲ್ಲಿ ಹುಡುಗನ ಕಾರ್ಯಕ್ಕೆ ಅತೀವ ಶ್ಲಾಘನೆ ವ್ಯಕ್ತವಾಗಿದೆ.
ಲಾಕ್ ಡೌನ್ ಎಂದು ಸುಮ್ಮನೆ ಮಂಡೆ ಬಿಸಿ ಮಾಡಿ ಹಾಗೋ ಹೀಗೋ ಕಾಲಹರಣ ಮಾಡೋ ತುಳುನಾಡಿನ ಅರ್ಜುನ್ ಹೂಡಿರೋ ಜ್ಞಾನ ಆದಾಯದ ಪ್ರತಿಭಾ ಬಾಣವು ಇತರ ಯುವಕರಿಗೆ ಮಾದರಿಯಾಗಿದೆ..
ಯೋಚನಾಶೀಲ ಯುವಕರಿಗೆ ಅರ್ಜುನ್ ಪೂಂಜಾ ಮಾದರಿ : ಶಾಸಕ ಯು.ಟಿ.ಖಾದರ್
http://dhunt.in/9pg06?s=a&ss=wsp
ಕೇಂದ್ರದ ಸ್ಮಾಟ್೯ ಆಪ್ ಯೋಜನೆಗೆ ಪೂರಕ ಯೋಚನೆ ಯುವಕರಲ್ಲಿ ಹೆಚ್ಚಾಗಬೇಕು : ಖಾದರ್
https://www.hosadigantha.com/ಕೇಂದ್ರದ-ಸ್ಮಾಟ್೯-ಆಪ್-ಯೋಜನ/
ಮಂಗ್ಳೂರು ಯುವಕನಿಂದ ಕೈ ಬಳಸದೇ ಕೈ ಸ್ವಚ್ಛ ಮಾಡೋ ಸ್ಯಾನಿಟೈಜರ್ ಸ್ಟ್ಯಾಂಡ್!
https://kannada.asianetnews.com/video/technology/hands-free-sanitizer-stand-by-mangaluru-youth-q9fq3n